ಭಾನುವಾರ, ಮಾರ್ಚ್ 24, 2019

ನನ್ನ ಬಗ್ಗೆ ಒಂದಿಷ್ಟು

ನನ್ನ ಬಗ್ಗೆ ಒಂದಿಷ್ಟು

https://www.facebook.com/453170585119115/posts/638847236551448/

ನಾ ಕವಿಯಲ್ಲ ಆದರೆ ಕವನಗಳನ್ನು ಬರೆಯುತ್ತೆನೆ
ನಾ ಬರಹಗಾರನಲ್ಲ ಆದರೆ ತೋಚಿದ್ದು ಬರಿತೆನೆ
ನಾ ಕಲಾವಿದನಲ್ಲ ಆದರೆ ಕಲೆಯನ್ನು ಆರಾಧಿಸ್ತೆನೆ
ನಾ ನಿರ್ದೆಶಕನಲ್ಲ ಆದರೂ ಚಿತ್ರ ನಿರ್ದೆಶಿಸುತ್ತಿದ್ದೆನೆ
ನಾನೊಬ್ಬ ಕನಸುಗಾರ
ರಾತ್ರಿ ಮಲಗಿದ್ದಾಗ ಕಾಣೊದು ನನಗೆ ಗೊತ್ತಿಲ್ಲ ಯಾಕೆಂದರೆ ನಿದ್ದೆಗಣ್ಣಲ್ಲಿ ಕಂಡ ಕನಸುಗಳು ಸ್ಕಲನವಾಗಿ ಹೊಗ್ತದೆ
ನಾನು ಹಗಲು ಕನಸುಗಾರ
ಯಾಕೆಂದ್ರೆ ಅಪ್ಪ ಹೆಳ್ತಿದ್ರು ಸ್ವಸ್ಥಚಿತ್ತವಾಗಿ ಕನಸು ಕಾಣು ಮತ್ತು ಅವು ನನಸಾಗಿಸಲು ಪ್ರಯಾಸಪಡು.

ನನ್ನ ಬಗ್ಗೆ ನಾನು ಹೆಳಬೆಕಂದ್ರೆ
ನಾನೊಬ್ಬ ಹಟವಾದಿ
ನಾನೊಬ್ಬ ಕನಸುಗಾರ

ನನ್ನ ಬಗ್ಗೆ ಜನ ಮಾತಾಡೊದು ಮಾತ್ರ ವಿಭಿನ್ನ
ಕೆಲವರು
ಪ್ರೀತಿಯಿಂದ ಗೆಳೆಯ ಅಂತಾರೆ
ಕೆಲವರು ಸಹಿಸಲಾರದೆ ಪಾಪಿ ಅಂತಾರೆ
ಹಲವರು ಮೊಂಡ ಅಂತಾರೆ
ಮೊನ್ನೆ ಒಬ್ಬ ಸೈಕೊ ಅಂದ

ನನ್ನ ಹಚ್ಚಿಕೊಂಡ ಹುಡುಗಿಯರು ತುಂಬಾ
ನಾಲ್ಕಾರು ದಿನ ನನ ಜೊತೆ ಮಾತಾಡಿದ್ರೆ ಸಾಕು ಮುಂದಿನ ದಿನಗಳಿಂದ "ಅಪ್ಪಾಜಿ" ಅಂತಾರೆ
ಈ ಪ್ರೀತಿ ಅನುಭವಿಸಿದವರಿಗೆ ಮಾತ್ರ ಗೊತ್ತು
ಆದರೂ ಕಣ್ಣಿಗೆ ಕಾಣದ ಆ ದೇವರಿಗೆ ಥ್ಯಾಂಕ್ಸ ಕರುಳ ಕುಡಿಗಳ ಕಿತ್ತುಕೊಂಡರೂ
ಎಷ್ಟೊಂದು ಮಕ್ಕಳನ್ನು ನನಗಾಗಿ ಧಾರೆ ಯೆರೆದ ಆ ದೇವರು.
ರಜಿಯಾ, ಜನ್ನತ್, ಶಬ್ಬು, ಅಮಿನಾ, ಹಸಿನಾ,
ಜಾನ್ವಿ, ಸ್ವಾತಿ, ನೇಹಾ, ಅನನ್ಯ, ಸಾಯಿ
ಯಲ್ಲ ಮಕ್ಕಳು ನನ್ನ ತುಂಬಾ ಪ್ರೀತಿಸ್ತಾರೆ
ನಾನೂ ಅವರನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸ್ತೆನೆ

ನನ್ನ ಹಚ್ಚಿಕೊಂಡ ಹುಡುಗಿಯರಲ್ಲಿ ಇನ್ನೂ ಹಲವರಿದ್ದಾರೆ
ದೀಪ
ಪರಿದ
ಅಣ್ಣನ ಸ್ನಾನ ನಿಡಿದ್ದಾರೆ ಒಡಹುಟ್ಟಿದವರು ಸುಳ್ಳಾಗಿ ಹೊದರು ಆತ್ಮದಿಂದ ಇವರು ಒಂದಾದವರು
ಆಡಿಕೊಳ್ಳೊರು ಎನೆಲ್ಲ ಆಡ್ಕೊಂಡ್ರೂ ನನಗಾಗಿ ಮಿಡಿಯುವ ಜೀವಗಳಿವು
ನಾ ನಕ್ಕರೆ ತಾವೂ ನಗುವ ನಾ ಅತ್ತರೆ ತಾವು ಅಳುವ ಸಹೊದರಿಯರನ್ನ ಕೊಟ್ಟ ದೇವರಿಗೆ ಶರಣು ಶರಣಾರ್ಥಿಗಳು

1998 ನನ್ನ ಅಪ್ಪನ ವಜ್ರಾಯುಧ ಹಿಡಿದುಕೊಂಡು ಪತ್ರಿಕಾರಂಗಕ್ಕೆ ಪ್ರವೆಶ ಪಡೆದೆ
2002 ಪಾಪಿಗಳ ಲೋಕಕ್ಕೊಬ್ಬ ಮಹಾಪಾಪಿಯ ಆಗಮನ
1998 ರಿಂದಲೂ ಪತ್ರಿಕೊದ್ಯಮಕ್ಕೆ ತಾಯಿ ಸ್ಥಾನ ಕೊಟ್ಟಿದ್ದೆನೆ
ಪತ್ರಿಕೆಯಿಂದ ನಾ ಗಳಿಸಿದ್ದು ಸ್ವಾಭಿಮಾನವೆಂಬ ಯಾವತ್ತೂ ಅಳಿಯದ ಆಸ್ತಿ
ನನ್ ತಂಗಿ ದೀಪ ಯಾವಾಗಲೂ ಬೈತಾನೆ ಇರ್ತಾಳೆ ನಿನಗಾಗಿ ಒಂದು ಸ್ವಂತ ಮನೆನಾದರೂ ಮಾಡ್ಕೊ ಅಣ್ಣ ಅಂತ
ಗೊತ್ತಿಲ್ಲ ತಂಗಿ ನಾ ನಂಬಿದ ದೈವ ನಿನ್ನ ಅಣ್ಣನಿಗೆ ಸ್ವಂತ ಮನೆ ಕೊಡುತ್ತೆ ಅಂತ ಮಾತ್ರ ಹೆಳಬಲ್ಲೆ.

ನನ್ನ ಬಗ್ಗೆ ಇನ್ನೂ ಹೆಳಲೆಇಲ್ಲ
ಹೆಸರು: ರಾಜವೆಂಕಟೇಶ ಕಾರಭಾರಿ
ತಂದೆ: ದೇವರಾಜ ಕಾರಭಾರಿ
ಗುರುತಿಸುವ ಹೆಸರು : ರಾ ದೇ ಕಾರಭಾರಿ
ಇತರ ನಾಮಗಳು:
ಕಾರಾಭಾರಿ ಕನಸು
ಕಾರಭಾರಿ ವೆಂಕಟ್
ಮಹಾಪಾಪಿ


ಉರು:
ಹುಟ್ಟಿದ್ದು ಗಂಡು ಮೆಟ್ಟಿನ ನಾಡು ಕರ್ನಾಟಕದ "ಗದಗ"
ಮದುವೆಯಾಗಿದ್ದು ಉತ್ತರ ಕರ್ನಾಟಕ ಬಾಗಲಕೋಟದ "ಮಂಜುಳಾ"ಳನ್ನು ಇದೆ ನಾ ಮಾಡಿಕೊಂಡ ಮೊಟ್ಟಮೊದಲ ಯಡವಟ್ಟು
ಕ್ರೈಸ್ತಳೆಂದರಿಯದೆ ಮದುವೆಯಾಗಿ 2004 ರಿಂದ 2013 ರ ವರೆಗೆ ಮಡದಿ ಮೋಹಕ್ಕೆ ಬಿದ್ದು ಧರ್ಮದ್ರೋಹಿಯೂ ಆದೆ 2013 ಕ್ಕೆ ಕಂಡಿದ್ದು ಕಾಣಬಾರದಾಗಿದ್ದ ಘಟನೆ.
ಸತ್ತ ಯೇಸುವಿನೊಂದಿಗೆ ನನ್ನ ಜೀವಂತ ಕುಟುಂಬವನ್ನೂ ಹೆಣವಾಗಿಸಿ ಅವಳು ಓಡಿಹೋದಳು ಜೊತೆಗೆ ನನ್ನ ಕರುಳಿನ ಕುಡಿ
ವಿನಿತ್
ವಿನುತಾ
ಇವರನ್ನೂ ಬಿಡಲಿಲ್ಲ
ಕೊನೆಗೆ 2013 ರಿಂದ ಏಕಾಂಗಿ

ಮತಾಂತರ ಮಾಡಲು ಮತ್ತು ಹೊಟ್ಟೆಪಾಡಿಗೆ ಹೊಗಿ  ಇಳಿದುಕೊಂಡಿದ್ದು
ತುಳು ನಾಡು "ಮಂಗಳೂರು" ಆದ್ರೆ ತುಳು ಅರ್ತ ಆಪುಜಿ
ಹೆಚ್ಚು ಹೊಟ್ಟೆ ಹಸಿವು ಆಗಿದ್ದಕ್ಕೆ ಹೊಗಿದ್ದು ಸಮುದ್ರದಾಚೆಯ "ದುಬೈ"
ಜೀವನ ಕಳೆದುಕೊಂಡ ಮೆಲೆ ನವಜೀವನ ಹುಡುಕಲು ಬಂದಿದ್ದು ನನ್ನ ಹುಟ್ಟೂರು ಗದಗ

ಜಾತಿ:
ದೇವರು ಉಂಟುಮಾಡಿದ್ದು ಎರಡೇ ಜಾತಿ ಒಂದು ಗಂಡು ಇನ್ನೊಂದು ಹೆಣ್ಣು
ಕುಲ: ಗೊತ್ತಿಲ್ಲ
ನಕ್ಷತ್ರ: ತಿಳಿದಿಲ್ಲ
ಧರ್ಮ: ಭಾರತಿಯ

ಕುಟುಂಬ:
ಜೀವಂತ ಕುಟುಂಬವನ್ನು ಉಳಿಸಲಾರದ ಯೇಸು ಸತ್ತ ಲಾಜರನನ್ನು ಹೆಗೆ ಬದುಕಿಸಿದ ಎಂಬ ಅರಿವು ಇಲ್ಲದೆ ಹೆಂಡತಿ ಮಕ್ಕಳು ಸ್ವರ್ಗದಾಸೆಗೆ ಓಡಿಹೊದರು
ಉಳಿದುಕೊಂಡಿದ್ದು ನಾನೊಬ್ಬನೆ

ನವಜೀವನದ ಆಸೆ ಹುಟ್ಟಿಸಿದ್ದು ಎರಡು ಜೀವಗಳು
ಒಬ್ಬಳು ಉಳಿದು ಬಳಿದದ್ದು ಕಿತ್ತುಕೊಂಡು ಕಳಿಸಿದಳು
ಮತ್ತೊಬ್ಬಳು ಕಲಿಯುಗದ ದ್ರೌಪದಿ

ನವಜೀವನ
ನನ್ನ ಮುದ್ದು ತಂಗಿ ದೀಪ ನನ್ನ ಮನದ ರೂಪವತಿಯನ್ನು ಹುಡುಕುತ್ತಿದ್ದಾಳೆ ಅವಳು ಸಿಕ್ಕೊಡನೆ ಆಮಂತ್ರಣ ಮುದ್ರಿಸುವೆ

ಭಾಷೆ: ಕನ್ನಡ

ವಿದ್ಯಾಭಾಸ:
ವಾದ ಮಾಡೋರಿಗೆ ಪ್ರತಿವಾದ ಮಾಡೋವಷ್ಟು ಬುದ್ದಿ ಇದೆ
ಕನಸಾಗಿಯೇ ಉಳಿದದ್ದು :
MA/PhD  ಮಾಡಬೇಕೆಂಬ ಬಯಕೆ

ಗುರಿ:
ತಪ್ಪಿಹೋಗಿದೆ

ಪ್ರಶಸ್ತಿಗಳು:
ನಾಡಿನ ಎಷ್ಟೋ ಹುಡುಗಿಯರು ಪ್ರೀತಿಯಿಂದ ಕರೆಯುವ
(ಅಣ್ಣ)
(ಅಪ್ಪ)
ನನಗಿದೆ ಸಾಕು

ಬರಹಗಳು:
ಬರೆದದ್ದು ತುಂಬಾ ಪತ್ರಿಕೆಗಳಲ್ಲಿ ಆದರೆ ಒಂದೂ ನೆನಪಿಲ್ಲ

ಸಂಪಾದಕನಾಗಿ:
ವಜ್ರಾಯುಧ ವಾರ ಪತ್ರಿಕೆ
ಧರ್ಮ ಪತಾಕೆ ಧಾರ್ಮಿಕ ಪತ್ರಿಕೆ
ವಿಧಾತ್ ವಿಶ್ರ ಭಾಷಾ ಪತ್ರಿಕೆ

ಸ್ವಂತ ಪತ್ರಿಕೆ
"ಮಹಾಪಾಪಿ"

ಹೊರಾಟ:
ಆಜಾದ್ ಆಂದೋಲನ

ರಾಜಕೀಯ:
ಹೊಲಸು ರಾಜಕೀಯಕ್ಕೆ ಬೆಸತ್ತು ಸ್ವಂತ ಸ್ವತಂತ್ರ ಪಕ್ಷದ ಸ್ಥಾಪನೆ
2018 ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ
ಶಿರಹಟ್ಟಿ ಮತಕ್ಷೇತ್ರದಿಂದ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದೆ

ರಾ ದೇ ಕಾರಭಾರಿ
ನನ್ನ ಹೆಸರಿನಡಿಯಲ್ಲೊಂದು ಟ್ಯಾಗ್ ಲೈನ್

ನಾನು ಯಾವ ಪಕ್ಷದ ಗುಲಾಮನೂ ಅಲ್ಲ ಯಾವ ನಾಯಕನ ದಲ್ಲಾಳಿಯೂ ಅಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ